ಹಬ್ಬಗಳ ಸಡಗರದಲ್ಲಿ ಮನಸ್ಸು ಹಗುರಾಗಲಿ!
ಪ್ರಜಾಪ್ರಗತಿ | 17 ಆಗಸ್ಟ್ 2020 ‘ರಾಜ್ಯದ ಎಲ್ಲ ಪ್ರಜೆಗಳೂ ಸುಖ ಸಮೃದ್ಧಿಗಳನ್ನು ಅನುಭವಿಸುತ್ತಿದ್ದಾರೆ. ಅವರಿಗೆ ಯಾವ ಭೀತಿಯಾಗಲೀ, ನೋವಾಗಲೀ ಇಲ್ಲ. ಹಾಗಿದ್ದರೂ ಅವರು ಮನದಾಳದಲ್ಲಿ ಸಂತೋಷವಾಗಿಲ್ಲ. ಏಕೆಂದರೆ ರಾಜ್ಯದಲ್ಲಿ ಇತ್ತೀಚೆಗೆ ಯಾವುದೇ ಸಂಭ್ರಮವಾಗಲೀ, ಉತ್ಸವಗಳಾಗಲೀ ನಡೆದಿಲ್ಲ. ಜನರು ಒಂದು ಬಗೆಯ ಆಲಸ್ಯದಿಂದ ಬಳಲಿದ್ದಾರೆ. ಇದನ್ನು ನಿವಾರಿಸುವುದೂ ಕೂಡಾ ರಾಜನ ಕರ್ತವ್ಯವೇ ಆಗುತ್ತದೆ’ ಶ್ರೀರಾಮನ ಜನ್ಮದಿನದಂದು ಅವನಿಗೆ ಶುಭಾಶಯ ಹೇಳಿ ಮಂತ್ರಿಯಾದ ಸುಮಂತ್ರ ಹೇಳುವ ಮಾತುಗಳಿವು. ಅದಕ್ಕಾಗಿ ಶ್ರೀರಾಮ ರಾಜಸೂಯ ಯಾಗ ಮಾಡುವುದೆಂದು ಯೋಚಿಸಿದಾಗ ಅದು ಸೂಕ್ತವಲ್ಲ ಎಂದ ಭರತ ಲಕ್ಷ್ಮಣರು ಅಶ್ವಮೇಧ ಒಳಿತೆಂದು ಸೂಚಿಸುತ್ತಾರೆ. ಶ್ರೀರಾಮ ಸಂಕಲ್ಪ ಮಾಡುತ್ತಾನೆ. ಮುಂದೆ ಇದೇ ನೆಪವಾಗಿ ಲವಕುಶರನ್ನು ಕಾಣುವಂತಾಗುತ್ತದೆ ಎಂಬುದೆಲ್ಲ ಇತಿಹಾಸ. ಹಾಗೆ ನೋಡಿದರೆ ಮನೆಮನೆಯ ಕತೆಯೂ ಅದೇ ಅಲ್ಲವೇ? ಎಲ್ಲವೂ ಇದೆ, ಮನಸ್ಸಿನಲ್ಲೇನೋ ಖಾಲಿತನ ಎಂಬುದು ಸಹಜವೇ. ಅದಕ್ಕಾಗಿಯೇ ಆಗೀಗ ಹಬ್ಬ ಹರಿದಿನಗಳ ಆಚರಣೆ. ಶ್ರಾವಣ ಮಾಸ ಬಂತೆಂದರೆ ಸಾಕು, ಮನೆಯೊಳಗಿನ ಸಡಗರ ಕೇಳಬೇಕೇ? ಆಶಾಢದ ಜಡವೆಲ್ಲ ತೊಲಗಿ ಹೊಸಹುಮ್ಮಸ್ಸಿನೊಂದಿಗೆ ಜನ ಅಣಿಯಾಗುತ್ತಾರೆ. ಭೀಮನ ಅಮವಾಸ್ಯೆ ಕಳೆದು ನಾಗರ ಪಂಚಮಿ, ವರಮಹಾ¯ಕ್ಷ್ಮೀ ವ್ರತ..ಇನ್ನೇನು ಗೌರಿ ಗಣೇಶ ಹಬ್ಬಕ್ಕೆ ದಿನಗಳು ದೂರವಿಲ್ಲ. ಕೊರೋನಾ ಇರಲಿ, ಇನ್ನೇನೇ ಆಗಲಿ ನಮ್ಮ ಜನರು ಎಲ್ಲವನ್ನೂ ಧಿಕ್ಕರಿಸಿ, ರೋಗದ ಭೀತಿಯನ್ನೂ